Wednesday, September 25, 2019

"ಮಹಾಸಾಧಕ" - ಡಾ ಬಾಬು ಕೃಷ್ಣಮೂರ್ತಿ




*MAHASADHAKA - A biographical novel in Kannada based on the life of Srila Prabhupada by Dr.Babu Krishnamurthy.

*At the outset Dr.Babu Krishnamurthy deserves appreciation for producing this 800 pages royal size novel in Kannada.

*After reading this novel ,you may feel that, this novel based on the actual life of great personality is thousand times better than all the How To Series and other Personality Development books available in the market.

*It's even hard to imagine what we may do at the age of 69 (of course if alive ) But this personality went to US at that age with forty rupees in hand with a dream of building 108 Krishna Temples all over the world .

The greatest contributions are -

*Converting the Hippies to spiritual path,

*Spreading the message of Krishna in Islam dominated countries.

*Building 108 Temples across the world .

*Writing more than 70 Volumes of books on spirituality.

*Taking world tour for more than dozen times after 70.
--

*ಕೋಟಿ ಹೊನ್ನುಗಳು ಆಯಸ್ಸಿನ ಒಂದು ಕ್ಷಣಕ್ಕೂ ಸಮಾನವಲ್ಲ .ಅದನ್ನು ವ್ಯರ್ಥಗೊಳಿಸಬಾರದು ಎನ್ನುವದನ್ನು ಇವರ ಜೀವನ ಸುಂದರವಾಗಿ ತಿಳಿಸುತ್ತದೆ .

*ತಾವು ಹಾಕಿಕೊಂಡಿರುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದು ,ಆತ್ಯಂತಿಕ ಕೃಷ್ಣ ಭಕ್ತಿ ಮತ್ತು ಗುರು ಭಕ್ತಿ ಹಾಗೂ ಅವರಲ್ಲಿ ಅದಮ್ಯ ಪ್ರೇಮ ,ಇವರ ಜೀವನವನ್ನು ರೂಪಿಸಿದ ಸಂಗತಿಗಳು .

*ಅಂದುಕೊಂಡಿರುವದನ್ನು ಅದೆಷ್ಟೇ ಕಷ್ಟವಾದರೂ ,ಎಂತಹ ನಿರಾಶೆ ಬಂದರೂ ,ಆಶೆಯ ಲವಲೇಶ ವಿಲ್ಲದಿದ್ದರೂ - ನಿರಾಶೆ ತಾಳದೆ ,ಎಡೆಬಿಡದ ಪ್ರಯತ್ನ ಮಾಡಿ ಸಾಧಿಸಿಯೇ ತೀರುವುದು ಇವರ ಅಭ್ಯಾಸ.

*ಸಮಾಜದಲ್ಲಿ ಪತಿತರನ್ನು ,ಹಾದಿ ಬಿಟ್ಟವರನ್ನು ,ಎಲ್ಲರಿಂದ ತಿರಸ್ಕೃತ ರಾದವರನ್ನು ,ತಿದ್ದಲು ಸಾಧ್ಯವೇ ಇಲ್ಲ ಎನ್ನುವಂತಹ ಜನರನ್ನು ಪ್ರೀತಿಯಿಂದ ಅಪ್ಪಿ ಅವರನ್ನು ತಿದ್ದಿ ,ತಮ್ಮ ದಾರಿಗೆ ತರುವ ಅದಮ್ಯ ಸಹನೆ ನಿಜವಾಗಿಯೂ ಬೆರಗು ಹುಟ್ಟಿಸುವಂತಹದು .

*ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಬಿಲಿಯನ್ ಐಡಿಯಾ ಗಳ ಕನಸುಕಂಡು ಅದು ಯಶಸ್ವೀ ಯಾಗುವಂತೆ ಮಾಡುವುದು ನಿಜವಾದ ಅಚ್ಚರಿ .

*ಸಾಧ್ಯವೇ ಇಲ್ಲದಿರುವ ಕನಸುಗಳನ್ನು ಕಂಡು ಅದನ್ನ ಸಾಕಾರ ಗೊಳಿಸುವ ಪರಿ ಹಾಗೂ ಕನಸುಗಳಿಗೆ ಯಾವುದೇ ಬೇಲಿಯನ್ನು ಹಾಕದೇ ಇರುವುದು ನಿಜವಾದ  ಅದ್ಭುತ .

*ಯಾವುದೇ ಒಂದು ವಿಚಾರ ತಲೆಯಲ್ಲಿ ಹೊಕ್ಕರೆ ಅದನ್ನ ಸಾಧಿಸುವ ವರೆಗೂ ಎಡೆಬಿಡದೆ ನಡೆಯುತ್ತಲೇ ಇರುವುದು ನಿಜವಾಗಿಯೂ ಕಲಿಯಬೇಕಾದ ಪಾಠ . ನಡೆಯುತ್ತಲೆ ಇರು ,ನಡೆಯುತ್ತಲೆ ಇರು ಎನ್ನುವುದೇ ಅವರ ಮಂತ್ರ .

*ಆ ಪ್ರಮಾಣದ ಬರವಣಿಗೆ ಅದು ಅಷ್ಟು ವಯಸ್ಸಾದ ಮೇಲೆ ಬರೆದು ಮುಗಿಸುವುದು ಅದು ದೇವರ ಸಂಕಲ್ಪ ದಿಂದ ಮಾತ್ರ ಸಾಧ್ಯ .

*ನಿರಂತರ ಅಧ್ಯಯನ ,ಶುದ್ಧ ಆಚಾರ ,ಎಡೆಬಿಡದ ಬರವಣಿಗೆ ,ಸಂಕೀರ್ತನ ಅವರ ದಿನಚರಿಯ ಭಾಗಗಳೇ ಆಗಿದ್ದವು .

*ಮಾನವ ಕಾಪಿ ಕ್ಯಾಟ್ ಅನ್ನುವ ವಿಷಯವನ್ನು ಸರಿಯಾದ ನೆಲೆಯಲ್ಲಿ ಅರ್ಥಮಾಡಿಕೊಂಡು ಅವರನ್ನು ಉನ್ನತ ಮಾರ್ಗಗಾಮಿತ್ವಕ್ಕೆ ಅಣಿಗೊಳಿಸುವ ಕಲೆ ಅದ್ಭುತ .

*ಮನುಷ್ಯನ ಹೃದಯ ತಲಪುವ ಮಾರ್ಗ ಅವನ ಹೊಟ್ಟೆಯ ಮೂಲಕ .ಕೃಷ್ಣ ಪ್ರಜ್ಞೆಯನ್ನು ಅವನ ಅಂತರಾತ್ಮಕ್ಕೆ ತಲುಪಿಸುವ ದಾರಿ ಎಂದು ಅವರು ಮನಗಾಣಿಸಿ ಕೊಂಡಿದ್ದರು .

ಒಟ್ಟಾಗಿ ಒಂದು ಅದ್ಭುತ ಪುಸ್ತಕ !!!.

- Prabhakar Deshpande

No comments:

Post a Comment