Sunday, September 22, 2019

"ಬದುಕಲು ಕಲಿಯಿರಿ" - ಸ್ವಾಮಿ ಜಗದಾತ್ಮಾನಂದ


ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ "ಬದುಕಲು ಕಲಿಯಿರಿ" ಎಂಬ ಪುಸ್ತಕವನ್ನು ಎಲ್ಲರೂ, ವಿಶೇಷವಾಗಿ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು ಅವಶ್ಯವಾಗಿ ಓದಬೇಕು.  ಬದುಕಿನಲ್ಲಿ ಉತ್ಸಾಹ ಕುಗ್ಗಿದಾಗ ಈ ಪುಸ್ತಕದಲ್ಲಿಯ ವಿಚಾರಗಳು ಸನ್ಮಿತ್ರನಂತೆ ಓದುಗರನ್ನು ಸ್ಪಂದಿಸಿ, ಅಂತರಂಗಕ್ಕೆ ಸ್ಫೂರ್ತಿ-ಬಲವನ್ನು ತುಂಬಿ ಸಾಧನೆಯ ಹಾದಿಯಲ್ಲಿ ಧೈರ್ಯದಿಂದ ಮುನ್ನುಗ್ಗಲು ಪ್ರೇರೇಪಿಸುತ್ತದೆ.
ನಮ್ಮಲ್ಲಿ ದುರ್ಬಲರನ್ನು, ಅಸಹಾಯಕರನ್ನು ಮೂದಲಿಸುವ ಜನರ ದೊಡ್ಡ ಗುಂಪೇ ಇದೆ. ದುರ್ಬಲರನ್ನು ತಿದ್ದಿ, ಸರಿಯಾದ ಮಾರ್ಗದಲ್ಲಿ ನಡೆಸಲು, ಅವರನ್ನು ಧೀರಪುರುಷರನ್ನಾಗಿಸಲು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿಯನ್ನು ಪಡೆದ ಲೇಖಕರು ಅವರ ವಿಚಾರಗಳನ್ನು ಪುಸ್ತಕದುದ್ದಕ್ಕೂ ಉದ್ಧರಿಸಿದ್ದಾರೆ.

“ನಾವು ಬದುಕು ಎಂದು ತಿಳಿದುಕೊಂಡದ್ದು ವೃತ್ತದ ಅರ್ಧಭಾಗ ಮಾತ್ರ. ಇನ್ನರ್ಧ ಭಾಗ ಬದುಕಿನ ಆಚೆಗೆ, ದೇಹಕ್ಕೆ ಅತೀತವಾದ ಅಸ್ತಿತ್ವದಲ್ಲಿ ಅಡಗಿಕೊಂಡಿದೆ." ... “ಕಷ್ಟ, ನೋವು, ನರಳಾಟಗಳಲ್ಲಿ ಸಿಲುಕಿದವರನ್ನು ಕಂಡು ಅವರಿಗೆ ತಮ್ಮಿಂದಾದ ಸಹಾಯ ಮಾಡುವುದು ಸತ್ಕರ್ಮವೆನಿಸುತ್ತದೆ." ...“ಕರ್ಮ ಸಿದ್ಧಾಂತವನ್ನು ತಪ್ಪಾಗಿ ತಿಳಕೊಂಡು, ಅದನ್ನು ವಿಧಿ-ವಾದ, ಮತ್ತು ಆಲಸ್ಯಕ್ಕೆ ಕಾರಣವಾದ ಸಿದ್ಧಾಂತವೆಂದು ಟೀಕಿಸುವವರು ನಮ್ಮಲ್ಲಿ ಸರ್ವತ್ರ ಕಂಡುಬರುತ್ತಾರೆ. (ಪ್ರತಿಯೊಂದು ಸಿದ್ಧಾಂತವನ್ನೂ ತಪ್ಪು ತಿಳಿದುಕೊಳ್ಳುವವರೂ, ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವವರೂ ಇದ್ದೇ ಇರುತ್ತಾರೆ.)" ಈ ಮಾತುಗಳನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ.

- ಗುರುದತ್ತ ಕೂಡ್ಲಿ

No comments:

Post a Comment